`ಐರಾವತ` ಚಿತ್ರಕ್ಕೆ ಅಪಾರ ವೆಚ್ಚದಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
Posted date: 22 Fri, May 2015 – 08:07:29 AM

 ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜು ಅವರು ನಿರ್ಮಿಸುತ್ತಿರುವ ‘ಐರಾವತ ಚಿತ್ರದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಹಳೇ ತಿರುಪತಿ ರಸ್ತೆಯಲ್ಲಿ ಆರು ದಿನಗಳ ಕಾಲ ನಡೆದಿದೆ. ದರ್ಶನ್, ಊರ್ವಶಿ ರೌತೆಲ, ಪ್ರಕಾಶ್ ರೈ ,ಅಶೋಕ್, ಜಿ.ಕೆ.ಗೋವಿಂದರಾವ್ ಹಾಗೂ ಸಾಹಸ ಕಲಾವಿದರು ಅಭಿನಯಿಸಿದ ಈ ಸಾಹಸ ಸನ್ನಿವೇಶಕ್ಕೆ ಖ್ಯಾತ ಸಾಹಸ ನಿರ್ದೇಶಕರಾದ ರಾಂಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇದು ಚಿತ್ರದ ಕ್ಲೈಮ್ಯಾಕ್ಸ್ ಕೂಡ ಹೌದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಊರ್ವಶಿ ರೌತೆಲ, ಪ್ರಕಾಶ್ ರೈ, ಸಾಧುಕೋಕಿಲ, ಅವಿನಾಶ್, ಅಶೋಕ್, ಜಿ.ಕೆ.ಗೋವಿಂದರಾವ್ ಮುಂತಾದವರಿದ್ದಾರೆ.
 ಎ.ಪಿ.ಅರ್ಜುನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶೇಖರ್‌ಚಂದ್ರ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಕಲೈ, ಗಣೇಶ್ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ ಅವರ ನಿರ್ಮಾಣ ನಿರ್ವಹಣೆಯಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed